ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ನಡೆಯುತ್ತಿರುವ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳ ನವು ತಮ್ಮ ಸಿದ್ಧಾಂತಕ್ಕೆ ಪೂರಕ ವಾಗಿರಬೇಕೆಂದು ಶಾಸಕರಾದ ಆರಗ eನೇಂದ್ರ ಮತ್ತವರ ಪಕ್ಷದ ವರು ಪ್ರತಿಪಾದಿಸಲು ಹೊರಟಿರು ವುದು ಅತ್ಯಂತ ದೌರ್ಭಾಗ್ಯದ ಸಂಗತಿ ಎಂದು ಜಿ ಕಾಂಗ್ರೆಸ್ ಮಾಧ್ಯಮ ಎಸ್ಸಿ ವಿಭಾಗದ ವಕ್ತಾರ ಪಡುವಳ್ಳಿ ಹಷೇಂದ್ರಕುಮಾರ್ ಹೇಳಿzರೆ.
ತಮ್ಮ ಮತೀಯ ಸಿದ್ಧಾಂತಕ್ಕೆ ಪೂರಕವಾಗಿ ಸಮ್ಮೇಳನ ನಡೆಯ ಬೇಕೆಂದು ಶಾಸಕರು ಬಯಸುತ್ತಿ ರುವುದು ಖಂಡನೀಯ. ಸಮ್ಮೇಳ ನದಲ್ಲಿ ಸನಾತನ ಸಂಸ್ಕತಿ, ಹಿಂದೂ ಧರ್ಮವನ್ನು ಹೀಯಾಳಿಸಬಾ ರದು, ಅವಹೇಳನ ಮಾಡಬಾರದು ಎಂದು ಎಚ್ಚರಿಕೆ ನೀಡಿರುವ ಶಾಸಕರು ರಾಷ ಕವಿ ಕುವೆಂಪು ಅವರು ಪ್ರತಿಪಾದಿಸಿದ ವಿಚಾರ ಕ್ರಾಂತಿಯ ಅರಿವಿಲ್ಲದ ಕನ್ನಡ ಸಾಹಿತ್ಯ ಮತ್ತು ಅದರ ಹೆಗ್ಗಳಿಕೆ ಯಾದ ವೈಚಾರಿಕ ಸಂವಾದವನ್ನೆ ನಿರಾಕರಿಸುತ್ತಾ ತಮ್ಮ ಬೌದ್ಧಿಕ ದಿವಾಳಿತನದ ಪ್ರದರ್ಶಿಸಿzರೆ ಎಂದು ಟೀಕಿಸಿzರೆ.
ಪತ್ರಕರ್ತರು, ಕವಿಗಳು, ವೈಚಾರಿಕ ಲೇಖಕರೂ ಆದ ಎನ್. ರವಿಕುಮಾರ್ (ಟೆಲೆಕ್ಸ್) ಅವರು ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿ ವಹಿಸುವುದನ್ನು ವಿರೋಧಿಸುತ್ತಿ ರುವ ಬಿಜೆಪಿಗರು ಎನ್. ರವಿ ಕುಮಾರ್ ಅವರು ಡಿ.ಬಿ. ಚಂದ್ರೇಗೌಡರ ಕುರಿತಾಗಿ ಬರೆದ ವಿಶ್ಲೇಷಣೆ ಯನ್ನು ಮುಂದಿಟ್ಟು ಕೊಂಡು ಅಪಪ್ರಚಾರಕ್ಕಿಳಿದಿರು ವುದು ಖಂಡನೀಯ. ತೀರ್ಥಹಳ್ಳಿ ಯವರೇ ಆದ ಡಾ.ಯು. ಆರ್.ಅನಂತಮೂರ್ತಿ ಅವರು ವಿಧಿವಶರಾದಾಗ ಪಟಾಕಿ ಸಿಡಿಸಿ ಸಂಭ್ರಮಿಸಿದವರು, ಶರಣ ಸಾಹಿ ತ್ಯದ ಮಹಾನ್ ವಿದ್ವಾಂಸರಾದ ಎಂ.ಎಂ ಕಲ್ಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಸಂಭ್ರಮಿಸಿದವರು ಈಗ ಸತ್ತವರ ಬಗ್ಗೆ ಹಗುರವಾಗಿ ಮಾತಾಡ ಬಾರದು ಎಂಬ ಉಪದೇಶ ಮಾಡುತ್ತಿರುವ ಶಾಸಕರು ಮತ್ತು ಅವರ ಬೆಂಬಲಿಗರು ಇಂತಹ ಸೋಗಲಾಡಿತನವನ್ನು ಬಿಡಬೇಕು.
ಶಾಸಕ ಆರಗ eನೇಂದ್ರ ಮತ್ತವರ ಬೆಂಬಲಿಗರು ಅತ್ಯುತ್ತಮ ಕವಿ, ಬರಹಗಾರ,ರಾಜಕೀಯ ವಿಶ್ಲೇಷಕ ಎನ್ ರವಿಕುಮಾರ್ ಅವರನ್ನು ಹೀಯಾಳಿಸುತ್ತಿರುವು ದರ ಹಿಂದೆ ದಲಿತ ವಿರೋಧಿ ಮನಃಸ್ಥಿತಿಯೂ ಅಡಗಿದೆ ಎಂದು ಗಂಭೀರವಾಗಿ ಆರೋಪಿಸಿರುವ ಕನ್ನಡ ಸಾಹಿತ್ಯ ಸಮ್ಮೇಳನ ಕುವೆಂಪು ಅವರು ಹಾಕಿಕೊಟ್ಟ ವೈಚಾರಿಕ ಸಂವಾದ ಮತ್ತು ನಾಡು-ನುಡಿಯ ಪ್ರಗತಿಯ ರುಜಮಾರ್ಗವೇ ಆಗಿರುತ್ತದೆ. ಇಂತಹ ಸಮ್ಮೇಳನಕ್ಕೆ ಸಲ್ಲದ ಕಾರಣವೊಡ್ಡಿ ಮತೀಯ ಸಿದ್ಧಾಂತದಿಂದ ಅಡ್ಡಿಪಡಿಸುವ ಮತೀಯ ಶಕ್ತಿಗಳ ನಡೆಯನ್ನು ಸಹಿಸಲಾಗದು ಎಂದು ಎಚ್ಚರಿಕೆ ನೀಡಿzರೆ.
