ಶುದ್ಧ ಹಸ್ತದ ಆಡಳಿತದಿಂದ ಬ್ಯಾಂಕಿನ ಏಳಿಗೆ ಸಾಧ್ಯ:ಬಿ.ವೈ .ರಾಘವೇಂದ್ರ

ಶಿರಾಳಕೊಪ್ಪ : ಪ್ರಾಮಾಣಿಕ ವಾಗಿ ಶುದ್ಧ ಹಸ್ತದಿಂದ ಆಡಳಿತ ನಡೆಸಿದಾಗ ಬ್ಯಾಂಕ್ ನ ಅಭಿವೃದ್ಧಿ ಹಾಗೂ ಏಳಿಗೆ ಸಾಧ್ಯ ಎಂದು ಶಿವಮೊಗ್ಗ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ತಿಳಿಸಿದರು.
ಅವರು ಶಿರಾಳಕೊಪ್ಪದ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಶ್ರೀ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ನ ೧೧೧ ನೇ ವಾರ್ಷಿ ಕೋತ್ಸವ ಸಮಾರಂಭವನ್ನು ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಿರಾಳಕೊಪ್ಪ ಈ ಭಾಗದಲ್ಲಿ ಬೆಳೆದ ಈ ಬ್ಯಾಂಕ್ ಜಿಯ ಅತ್ಯಂತ ಶ್ರೇಷ್ಟ ಮಟ್ಟದ ಆಡಳಿತ ನೀಡುವ ಸಂಸ್ಥೆಯಾಗಿದ್ದು, ಆಡಳಿತ ಮಂಡಳಿ ಹಾಗೂ ಸದಸ್ಯರ ಶ್ರಮದಿಂದ ಸಾಕಷ್ಟು ನೆರವಿನ ಹೊಳೆ ಹರಿಸುವ ಸಂಸ್ಥೆಯಾಗಿದೆ ಎಂದು ಹೇಳಿದರು.
ಶತಮಾನ ಪೂರೈಸಿದ ಸವಿ ನೆನಪಿಗಾಗಿ ೪೫೦೦ ಸದಸ್ಯರುಗಳಿಗೆ ಬೆಳ್ಳಿ ನಾಣ್ಯ ಕೊಡುಗೆ ನೀಡಲಾ ಗುತ್ತಿದ್ದು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ನಾಣ್ಯ ವನ್ನು ಅನಾವರಣಗೊಳಿಸಿದರು.
೧೧೧ ವರ್ಷಗಳಿಂದ ಈ ಬ್ಯಾಂಕ್ ಸಹಕಾರಿ ವ್ಯವಸ್ಥೆಯ ನಡುವೆ ಬೆಳೆಯುತ್ತಾ ಇಲ್ಲಿನ ಸಾವಿರಾರು ಜನರಿಗೆ ಸಾಲ ಸೌಲಭ್ಯ ನೀಡುತ್ತಾ ನೆರವು ನೀಡುವ ಪ್ರಮುಖ ಸಂಸ್ಥೆಯಾಗಿ ಗುರುತಿಸಿ ಕೊಂಡಿದೆ. ಇದಕ್ಕೆ ಕಾರಣ ಕರ್ತ ರಾದ ಎಲ್ಲರನ್ನು ಅಭಿನಂದಿಸು ವುದಾಗಿ ಬಿಎಸ್‌ವೈತಿಳಿಸಿದರು.
ಈ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಶಿರಾಳಕೊಪ್ಪದ ಮ ನಿ ಪ್ರ ಸಿದ್ಧೇಶ್ವರ ಸ್ವಾಮೀಜಿ ಯವರು ಈ ಬ್ಯಾಂಕ್ ಇನ್ನಷ್ಟು ಬೆಳೆದು ಎಲ್ಲರ ಆರ್ಥಿಕ ಗುಣ ಮಟ್ಟವನ್ನು ಉಳಿಸಿ ಬೆಳಸಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಕುಪ್ಪೇಲೂರು ವೇದಮೂರ್ತಿ ಅವರು ಇಂತಹದೊಂದು ಐತಿಹಾ ಸಿಕ ದಿನದಲ್ಲಿ ಅಧ್ಯಕ್ಷನಾಗಿ ಆಚರಿ ಸುವ ಅದೃಷ್ಟ ನೀಡಿದ ಆಡಳಿತ ಮಂಡಳಿ ಹಾಗೂ ಸದಸ್ಯರಿಗೆ ಅಭಿನಂದಿಸಿದರು.
ಶತಮಾನ ಪೂರೈಸಿದ ಜಿಯ ಎರಡನೇ ಬ್ಯಾಂಕ್ ಶ್ರೀ ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ನಮ್ಮದಾಗಿದ್ದು, ೧೪೦ ಕೋಟಿ ವಹಿವಾಟು ನಡೆಸುತ್ತಿದೆ ಎಂದರು.
ಬ್ಯಾಂಕಿನ ಏಳಿಗೆಗೆ ಸದಾ ಸಕ್ರಿಯವಾಗಿ ಪ್ರಾಮಾಣಿಕ ಮತ್ತು ಶುದ್ಧ ಹಸ್ತದಿಂದ ಕೆಲಸ ಮಾಡುತ್ತೇನೆ. ಇದಕ್ಕೆ ಆಡಳಿತ ಮಂಡಳಿ ಹಾಗೂ ಬ್ಯಾಂಕ್ ನ ಉದ್ಯೋಗಿಗಳು ಜೊತೆಯಾಗಿ zರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ನ ಪದಾಧಿಕಾರಿಗಳು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ ಮತ್ತು ೪೦೦೦ ಹೆಚ್ಚು ಸದಸ್ಯರು ಉಪಸ್ಥಿತರಿದ್ದರು.