ಸರ್ಕಾರ ಸಮಪಾಲು ಸಮಬಾಳು ನೀಡುವಲ್ಲಿ ಸಂವಿಧಾನದ ಪಾತ್ರ ಬಹು ಮುಖ್ಯ…

ಶಿಕಾರಿಪುರ : ಭಾರತ ಜಗತ್ತಿನ ಅತಿ ದೊಡ್ಡ ಪ್ರಜಪ್ರಭುತ್ವ ದೇಶವಾಗಿ ಪ್ರಸಿದ್ದವಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆಗೂ ರಕ್ಷಣೆ ಬದುಕುವ ಹಕ್ಕು ಸ್ವಾತಂತ್ರ ಸಂವಿಧಾನದ ಮೂಲಕ ದೊರೆತಿದೆ. ಸರ್ಕಾರ ಪ್ರತಿಯೊಬ್ಬರಿಗೂ ಸಮ ಪಾಲು ಸಮಬಾಳು ನೀಡುವಲ್ಲಿ ಸಂವಿಧಾನದ ಪಾತ್ರ ಬಹು ಮುಖ್ಯವಾಗಿದೆ ಎಂದು ಇಲ್ಲಿನ ಕುಮದ್ವತಿ ಕೇಂದ್ರೀಯ ವಸತಿ ಶಾಲೆಯ ಕನ್ನಡ ಸಹ ಶಿಕ್ಷಕ ಗಿರೀಶ್ ತಿಳಿಸಿದರು.
ಸೋಮವಾರ ಪಟ್ಟಣದ ಕುಮದ್ವತಿ ಕೇಂದ್ರೀಯ ವಸತಿ ಶಾಲೆಯಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಸಂವಿಧಾನ ನಮ್ಮ ಉಸಿರು – ಸ್ವಾತಂತ್ರ್ಯ ಸಮಾನತೆಯ ತತ್ವದಡಿಯಲ್ಲಿ ಪ್ರಜಪ್ರಭುತ್ವಕ್ಕೆ ಸುಭಧ್ರ ಹಾಗೂ ಸ್ಪಷ್ಟವಾದ ಸಂವಿಧಾನವನ್ನು ೧೯೫೦, ಜನವರಿ ೨೬ ರಂದು ಜರಿಗೊಳಿಸಲಾ ಯಿತು.ಆ ದಿನವನ್ನು ಗಣರಾ ಜ್ಯೋತ್ಸವವಾಗಿ ಆಚರಿಸಲಾಗು ತ್ತದೆ.ಇದರ ಮೂಲಕರ್ತೃ ಅಂಬೇ ಡ್ಕರ್. ಆದ್ದರಿಂದ ಅವರನ್ನು ಸಂವಿ ಧಾನ ಶಿಲ್ಪಿ ಎಂದು ಕರೆಯು ತ್ತಾರೆ.೧೯೪೯ ನ.೨೬ ಸಂವಿಧಾನ ರಚಿಸಿ ಶಾಸನ ಸಭೆಯಲ್ಲಿ ಕೆಲ ತಿದ್ದುಪಡಿಗಳೊಂದಿಗೆ ರಚನಾ ಸಭೆಯು ೧೯೫೦ರಲ್ಲಿ ಸಂವಿಧಾನ ವನ್ನು ಜರಿಗೊಳಿಸಿತು.೨೦೧೫ ರಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರು ನ.೨೬ ಸಂವಿಧಾನ ದಿನ ಆಚರಣೆ ದಿನವನ್ನಾಗಿ ಘೋಷಿಸಿ zರೆ ಎಂದು ತಿಳಿಸಿದ ಅವರು ಸಂವಿಧಾನಕ್ಕೆ ಅನುಗುಣವಾಗಿ ಪ್ರತಿಯೊಬ್ಬ ಭಾರತೀಯನು ಕರ್ತವ್ಯ ನಿರ್ವಹಿಸಬೇಕು. ದೇಶದ ಘನತೆ ಹೆಚ್ಚಿಸಬೇಕು ಎಂದು ತಿಳಿಸಿದರು.
ಜತಿ ಬೇಧವಿಲ್ಲದೆ ಸರ್ವ ರಿಗೂ ಸಮಾನ ಬದುಕುವ ಹಕ್ಕನ್ನು ಸಂವಿಧಾನದ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಗೆ ಕಲ್ಪಿಸಿಕೊಡ ಲಾಗಿದೆ ಸಂವಿಧಾನದಲ್ಲಿನ ಆಶಯ ಗಳನ್ನು ಗೌರವಿಸಿ ಪರಸ್ಪರ ಸಹ ಬಾಳ್ವೆಯ ಮೂಲಕ ಬದುಕಿದಾಗ ದೇಶ ಅಭಿವೃದ್ದಿಯ ಉನ್ನತ ಮಟ್ಟ ಕ್ಕೇರಲಿದೆ ಎಂದು ತಿಳಿಸಿದರು.
೯ನೇ ತರಗತಿ ವಿದ್ಯಾರ್ಥಿನಿ ಇಂಚರ ಸಂವಿಧಾನದ ಮಹತ್ವ ಕುರಿತು ಮಾತನಾಡಿದರು.ಶಿಕ್ಷಕ ಜಿಯಾವು ಸಂವಿಧಾನದ ಪ್ರಸ್ಥಾ ವನೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು.ಅಂಬೇಡ್ಕರ್ರವರ ಭಾವಚಿತ್ರಕ್ಕೆ ಶಾಲೆಯ ಪ್ರಾಂಶು ಪಾಲರಾದ ಶರ್ವಾಣಿ,ಸಂಯೋಜ ನಾಧಿಕಾರಿ ವಾಣಿ,ಸಹಶಿಕ್ಷಕರಾದ ಸಂಗೀತ,ಸುಜತ,ರಶ್ಮಿ,ನವೀನ್, ರಾಜು,ಗಿರೀಶ್ ಮತ್ತಿತರರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.೫ ನೇ ತರಗತಿ ಮಕ್ಕಳು ದೇಶಭಕ್ತಿ ಗೀತೆ ಹಾಡಿ ದರು. ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಜರಿದ್ದರು.